ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಅಮರಾ....ವತಿ

Wednesday, April 16, 2008

ಅವಕಾಶಗಳ ಅಮರಾವತಿಯಲ್ಲಿ
ಗೋರಿಗಳು ಸಾವಿರಾರು
ಒಕ್ಕಣ್ಣ ವಿಕಲಾಂಗರ ನಡುವೆ
ಹತ ಭಾಗ್ಯ ಚೇತನರು
ಶೋಕ, ನಗೆಬುಗ್ಗೆ ಒಸರುಗಳ
ಕೋಶಗಳೊಳಗೆ ನಿರ್ವಾತ
ಸದ್ದೇ ಇರದ ಗದ್ದಲ
ಗೊಂದಲ, ಬಿಳಿ
ಮನೆ ಮನೆಯಲ್ಲಿ
ಕತ್ತಲೆಗೇ ಮೆತ್ತಿದ ಹಸುರು
ಕಾಣದ ನೆಲದಲ್ಲಿ ನೆತ್ತರು
ಯಾರ ಕೈವಾಡಕ್ಕೆ ಮತ್ತಾರ ಹೆಸರು
ವಿತ್ತಚೇತನದ ಅಡಿಪಾಯದಲ್ಲಿ
ಹೆಗ್ಗಣಗಳ ಗೂಡು
ಪಾರಿವಾಳವಿರದ ಮಾಡು
ಹೊಸನಗೆಯ ಸಮಾಧಿಯಲ್ಲಿ
ಹಳೆಹುಲಿಗಳ ದರಬಾರು
ನೆತ್ತಿ ಕಾಯುವ ದೈವ ಅವ-
ನೆತ್ತಿ ಕುಕ್ಕಿದರೆ
ಕಾವನಾರು?
(೯-೧೧'ರ ದುರಂತ, ತದನಂತರದ ಅಫ್ಘಾನ್ ಯುದ್ಧ, ಆಮೇಲಿನ ಇರಾಕ್ ಯುದ್ಧ... ಇವೆಲ್ಲದರ ಕಾರಣ, ಪರಿಣಾಮಗಳ ಚಿಂತನೆಯಲ್ಲಿ...)
(೧೬-ಎಪ್ರಿಲ್-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 3:40 AM
Labels: ,

6 ಪತ್ರೋತ್ತರ:
sunaath said...
ವ್ಯಂಗ, ಶೋಕ ಮಿಳಿತವಾದ ಸುಂದರ ಅಭಿವ್ಯಕ್ತಿ.
ಜ್ಯೋತಿ, ಕವಿತೆ ಓದಿದಾಗ ಅದರ ವಸ್ತುವಿನಿಂದ ದುಃಖವಾಯಿತು. ಚೆನ್ನಾಗಿ ಬರೆದಿರುವಿಯಮ್ಮ.
-ಕಾಕಾ
April 17, 2008 8:34 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಕಾಕಾ.
April 17, 2008 10:58 AM

myna said...
suptadeeptiyavare, arthapoornavada kavana kottideeri.
April 19, 2008 1:51 PM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಮೈನಾ.
April 19, 2008 10:46 PM

VENU VINOD said...
ಭಯೋತ್ಪಾದಕರ ಲೋಕದತ್ತ ವಾಲಿದ್ದೀರಿ ???
April 20, 2008 12:43 AM

ಸುಪ್ತದೀಪ್ತಿ suptadeepti said...
'ಆ ಲೋಕ' ಈ ಲೋಕದೊಳಗೆ ಹೇಗೆಲ್ಲ ಪರಿಣಾಮ ಬೀರಿದೆ ಅನ್ನುವತ್ತ ಒಂದು ಸಣ್ಣ ನೋಟ, ಹೌದು.
ಪ್ರತಿಕ್ರಿಯೆಗೆ ಧನ್ಯವಾದ, ವೇಣು.
April 20, 2008 12:24 PM

No comments: