"ಅಳುವ ಕಂದನ ತುಟಿಯು ಹವಳಾದ ಕುಡಿ ಹಂಗ"
ಮತ್ತೆ ಅಳುವಿನ ಮಾಟ ಕುಣಿವ ಮಣಕನ ಹಾಂಗ
ಅಳದೆ ಸೊರಗದೆ ಮಲಗಿ ಚಣವೊಂದು ಚಣದಲ್ಲಿ
ನಿದಿರೆ ಜೊತೆ ಬರುವವಳು, ಕನಸ ಕಿನ್ನರಿಯು
ಆಟವಾಡಿದ ಕನಸು, ಮತ್ತೆ ಓಡಿದ ಕನಸು
ಗೆಳೆಯರೆಲ್ಲರ ಕೂಡಿ ಈಜು ಹೊಡೆದಾ ಕನಸು
ಏನೋ ಮಾಯಕದಲ್ಲಿ ಖುಷಿಯ ಮೆರವಣಿಗೆಯಲಿ
ಕಣ್ಣೊಳಗೆ ಇಳಿವವಳು ಕನಸ ಕಿನ್ನರಿಯು
ಚಂದಿರನ ಅಂಗಳದಿ ರಂಗೋಲಿ ಗೆರೆಯೆಳೆದು
ಚುಕ್ಕಿಗಳ ಕೈ ಹಿಡಿದು, ನೀಹಾರಿಕೆಯನೆಳೆದು
ಕಂಬ ಗೋಪುರದಲ್ಲಿ ಬಳ್ಳಿ ಚಪ್ಪರದೊಳಗೆ
ಅರಳುವುದ ಬರೆವವಳು ಕನಸ ಕಿನ್ನರಿಯು
ಗಾಳಿಗಾಲಿಯನೇರಿ, ಕೂದಲನು ತೂರಾಡಿ
ದಿಕ್ಕುದಿಕ್ಕನು ಮೀರಿ ಅನಂತದೊಳು ನೋಡಿ
ಮೈಮರೆವ ಅರಿವಳಿಕೆ ಆವರಿಸಿ ನಗುವವಳು
ಮುತ್ತು ಮುತ್ತನು ಹೊತ್ತ ಕನಸ ಕಿನ್ನರಿಯು
(೨೭-ಜನವರಿ-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday 28 January, 2010
Friday 15 January, 2010
ನನ್ನೊಳಗಿನ ಪರ್ಯಾಯ
ನನ್ನ ಪರ್ಯಾಯವದು ನನ್ನೊಳಗೆಯೇ ಕೂತು
ಏನೇನೋ ಮಸಲತ್ತು ಮಾಡುತ್ತಿದೆ
ಹಾಗಲ್ಲ, ಹೀಗೆಂದು ತಿಳಿಹೇಳುವುದ ಬಿಟ್ಟು
ಬೆದರಿಕೆಯ ಆಟಗಳ ಹೂಡುತ್ತಿದೆ
ಇಳಿಯುವುದ ತಿಳಿಯದದು, ಏರುತೇರುತ್ತಲೇ
ಅ-ನಿಯತ ದಾರಿಯಲಿ ನೂಕಿ ನೂಕಿ
"ಏರಿದವ ಚಿಕ್ಕವನು ಇರಬೇಕು" ಎನ್ನದೆ
ತೋರುವುದು ಕೊಬ್ಬು ಮದ ಬೆಡಗು ಶೋಕಿ
ಅಂಜಿಕೆಯ ಮೂಲವದು ಸ್ವಾರ್ಥದ ಹುತ್ತವು
ಸುಳಿವ ಹೆಡೆ ನೆವದಲ್ಲಿ ಭಂಡ ಧೈರ್ಯ
ಕಾರ್ಯಕಾರಣಕೆಲ್ಲ ನಂಬಿಕೆಯ ತಳಕಟ್ಟು
ಅಳಿಸಿದರೆ ತಿಳಿಯುವುದು ನಿಜದ ಶೌರ್ಯ
ಗೂಢವಾಗಿರುತಿದ್ದ ಒಳಮನದ ಪದರಗಳ
ಪರ್ಯಾಯ ನೆಲೆಗಳನು ಅರಿವ ಕಲೆಯು
ಸಂಮೋಹನದ ಹಾದಿ ಅರಿವನರಳಿಸಿದಾಗ
ಬಾನಿನಗಲದ ಆಚೆ ಮಿತಿಯ ನೆಲೆಯು
(೨೩-ಸೆಪ್ಟೆಂಬರ್-೨೦೦೯)
(ಒಂದು ಸಮ್ಮೋಹನ ತರಗತಿ ಮತ್ತು ಸ್ವಸಮ್ಮೋಹನ ಪ್ರಯೋಗದ ಬಳಿಕ ಹೊಳೆದದ್ದು)
ಏನೇನೋ ಮಸಲತ್ತು ಮಾಡುತ್ತಿದೆ
ಹಾಗಲ್ಲ, ಹೀಗೆಂದು ತಿಳಿಹೇಳುವುದ ಬಿಟ್ಟು
ಬೆದರಿಕೆಯ ಆಟಗಳ ಹೂಡುತ್ತಿದೆ
ಇಳಿಯುವುದ ತಿಳಿಯದದು, ಏರುತೇರುತ್ತಲೇ
ಅ-ನಿಯತ ದಾರಿಯಲಿ ನೂಕಿ ನೂಕಿ
"ಏರಿದವ ಚಿಕ್ಕವನು ಇರಬೇಕು" ಎನ್ನದೆ
ತೋರುವುದು ಕೊಬ್ಬು ಮದ ಬೆಡಗು ಶೋಕಿ
ಅಂಜಿಕೆಯ ಮೂಲವದು ಸ್ವಾರ್ಥದ ಹುತ್ತವು
ಸುಳಿವ ಹೆಡೆ ನೆವದಲ್ಲಿ ಭಂಡ ಧೈರ್ಯ
ಕಾರ್ಯಕಾರಣಕೆಲ್ಲ ನಂಬಿಕೆಯ ತಳಕಟ್ಟು
ಅಳಿಸಿದರೆ ತಿಳಿಯುವುದು ನಿಜದ ಶೌರ್ಯ
ಗೂಢವಾಗಿರುತಿದ್ದ ಒಳಮನದ ಪದರಗಳ
ಪರ್ಯಾಯ ನೆಲೆಗಳನು ಅರಿವ ಕಲೆಯು
ಸಂಮೋಹನದ ಹಾದಿ ಅರಿವನರಳಿಸಿದಾಗ
ಬಾನಿನಗಲದ ಆಚೆ ಮಿತಿಯ ನೆಲೆಯು
(೨೩-ಸೆಪ್ಟೆಂಬರ್-೨೦೦೯)
(ಒಂದು ಸಮ್ಮೋಹನ ತರಗತಿ ಮತ್ತು ಸ್ವಸಮ್ಮೋಹನ ಪ್ರಯೋಗದ ಬಳಿಕ ಹೊಳೆದದ್ದು)
Labels:
ಆತ್ಮ ಚಿಂತನ...,
ರಿಗ್ರೆಷನ್,
ಹೀಗೇ ಸಾಗಲಿ,
ಹೊಚ್ಚ ಹೊಸದು
Saturday 9 January, 2010
ಬದುಕು
ಜೆಟ್ ಸಾಗಿದ ಹಾದಿ
ಬೆಳ್ಳಿ ರೇಖೆ, ರಾಜ ಬೀದಿ
ಸದ್ದು ಗದ್ದಲವಿಲ್ಲ
ಕ್ಷಣಗಳ ಬಿಳಿ ಮೋಡ
ನೆನಪುಗಳ ಚೂರು ಪಾರು
ಪರದೆಯೊಳಗೆ ತೆರೆದ ಬಾನು
ಕಾಣದ ಅರಿಯದ ವಿಶಾಲ
ಗಾಳಿ ತೂರಿ ಹಾರಿದಾಗ
ತಣ್ಣನೆ ಬರೀ ನೀಲ
ನೆಪಗಳ ಚೀಲ
ನಾನು ಸಾಗಿದ ಹಾದಿ
ಕಲ್ಲು, ಮುಳ್ಳು, ಹೂವು, ಹಣ್ಣು
ಸದ್ದಿಗೇ ಬಿಡುವಿಲ್ಲ
ಒಂದೆರಡು ಬೆಳ್ಳಿಗೆರೆ
ಹಿನ್ನೋಟಗಳು, ಕನವರಿಕೆ
ಕಂಡಷ್ಟೇ ಸತ್ಯದ ಅರಿವು
ರೆಕ್ಕೆ ತೆರೆದ ಅಂಗಳದಲ್ಲಿ
ರಚ್ಚೆ ಹಿಡಿದು ಸುರಿದದ್ದು
ಸರಿದಾಗ ಕಂಡದ್ದು
ನೀಲಬಿಂಬ ನಿಚ್ಚಳ
(೦೩-ಎಪ್ರಿಲ್-೨೦೦೭)
ಬೆಳ್ಳಿ ರೇಖೆ, ರಾಜ ಬೀದಿ
ಸದ್ದು ಗದ್ದಲವಿಲ್ಲ
ಕ್ಷಣಗಳ ಬಿಳಿ ಮೋಡ
ನೆನಪುಗಳ ಚೂರು ಪಾರು
ಪರದೆಯೊಳಗೆ ತೆರೆದ ಬಾನು
ಕಾಣದ ಅರಿಯದ ವಿಶಾಲ
ಗಾಳಿ ತೂರಿ ಹಾರಿದಾಗ
ತಣ್ಣನೆ ಬರೀ ನೀಲ
ನೆಪಗಳ ಚೀಲ
ನಾನು ಸಾಗಿದ ಹಾದಿ
ಕಲ್ಲು, ಮುಳ್ಳು, ಹೂವು, ಹಣ್ಣು
ಸದ್ದಿಗೇ ಬಿಡುವಿಲ್ಲ
ಒಂದೆರಡು ಬೆಳ್ಳಿಗೆರೆ
ಹಿನ್ನೋಟಗಳು, ಕನವರಿಕೆ
ಕಂಡಷ್ಟೇ ಸತ್ಯದ ಅರಿವು
ರೆಕ್ಕೆ ತೆರೆದ ಅಂಗಳದಲ್ಲಿ
ರಚ್ಚೆ ಹಿಡಿದು ಸುರಿದದ್ದು
ಸರಿದಾಗ ಕಂಡದ್ದು
ನೀಲಬಿಂಬ ನಿಚ್ಚಳ
(೦೩-ಎಪ್ರಿಲ್-೨೦೦೭)
Friday 1 January, 2010
ಮತ್ತೊಂದು ಹೊಸತು
ಓದುಗರಿಗೆಲ್ಲ ಹೊಸವರ್ಷದ ಶುಭಾಶಯಗಳು.
ಯಾರನ್ನೂ ಯಾವುದನ್ನೂ ಲೆಕ್ಕಿಸದ ಕಾಲದ ಲೆಕ್ಕದಲ್ಲಿ ಇನ್ನೂ ಒಂದು ಅಂಕೆ ಸವೆದಿದೆ. ಕಳೆದ ಕಾಲವೆಲ್ಲವನ್ನೂ ಕಳೆದುಕೊಳ್ಳದೆ ಕಲಿತುಕೊಳ್ಳುತ್ತಾ ಮುಂದೆ ಸಾಗುವುದರಲ್ಲಿ ಸಮಯದ ಸಾರ್ಥಕತೆಯನ್ನು ಕಂಡುಕೊಂಡರೆ ಮನುಜಮತಕ್ಕೇ ಹಿತವಲ್ಲವೆ?
ಹೊಸತೊಂದರ ಆರಂಭ ಎಲ್ಲ ಹಿತ ಸುಖಗಳಿಗೆ ನಾಂದಿಯಾಗಲಿ. ಜಗಜೀವನ ಮಂಗಳವಾಗಲಿ.
ಎಲ್ಲ ಗದ್ದಲಗಳ ನಡುವೆಯೂ
ಮತ್ತದೇ ಸೂರ್ಯ, ಹಗಲು, ಬೆಳಕು;
ಗೋಡೆ ಮೇಲಿನ ಚಿತ್ರ ಮಾತ್ರ ಹೊಸದು
ಸುತ್ತೆಲ್ಲ ಅದೇ ರಾಗ, ಅದೇ ತಾಳ, ಅದೇ ಹಾಡು
ಪಲ್ಲವಿಯಲ್ಲೇ ತಿರುಗಣೆ
ಮುಂದೇನು? ಪ್ರಶ್ನೆಗಳಿವೆ ಹಲವಾರು
ಕೇಳಿದವರಿಗಂತೂ ಉತ್ತರ ತಿಳಿಯದು
ಕೇಳಿಸಿಕೊಂಡವರಿಗೆ ಅವರದೇ ತಲೆನೋವು
ತರಾವರಿ ಗುಳಿಗೆಗಳು ಮಾರಾಟಕ್ಕಿವೆ, ಕೊಳ್ಳುವವರಿಲ್ಲ
ಹೊಸತನದ ಗಾಳಿಯಲ್ಲಿ ಗುಂಡುಗಳ ಹಾರಾಟ
ಮೂಗಿನೊಳಗೆ ಗೊಂದಲದ ಹೊಗೆ
ಉಸಿರಿನ ವಿಷ ಬೆನ್ನಲ್ಲಿ ಕಾಣದು
ಕೊಪ್ಪರಿಗೆಯೊಳಗೇ ಕ್ರೂರಿಗಳ ಸಾಮ್ರಾಜ್ಯ
ಕೊಳ್ಳುಬಾಕನ ಹೆಣದಡಿಯಲ್ಲೂ ಹೂಳುವ ಗುತ್ತಿಗೆ
ಕತ್ತಿ ಹಿಡಿದವನ ಕೈ ಕಾಣದ ಸಾಮಾನ್ಯ ಕುತ್ತಿಗೆ
ಎಷ್ಟು ನೋವಿಗೆ ಎಷ್ಟು ನಲಿವು
ಲೆಕ್ಕ ಇಟ್ಟವರಿದ್ದೀರಾ?
ಎಲ್ಲಿಯ ಸ್ವಾರ್ಥಕ್ಕೆ ಎಲ್ಲಿಯ ಬಲಿ
ಸೂತ್ರ ಹಿಡಿದವರಿದ್ದೀರಾ?
ಯಾರ ನೆರಳಿಗೆ ಯಾರ ಜೀವ
ಸೂಕ್ಷ್ಮ ಕಂಡವರಿದ್ದೀರಾ?
ಗಾಳಿಗೋಪುರದಂಥ ಅರಗಿನರಮನೆಗಳು
ನೆಲಕಚ್ಚಿದಾಗಿಂದ ಕೆಚ್ಚಿನ ಕೆಸರಲ್ಲೂ
ಕುಸಿದದ್ದೇ ಬಂತು, ಕಿಸಿದದ್ದೇ ಬಂತು
ಜಾರಿದವರೆಲ್ಲ ಜಾಣರಾಗಲಿಲ್ಲ
ಎದ್ದ ಜಾಣರ ಹೆಸರು ಕಾಣಲೇ ಇಲ್ಲ
ಸುಖನಿದ್ರೆ ಎಲ್ಲರ ಸೊತ್ತಲ್ಲ
ಮತ್ತದೇ ಚಂದ್ರ, ಇರುಳು, ಕತ್ತಲು
ಅಷ್ಟಾದರೂ, ಕಂಡಷ್ಟೇ ಆಕಾಶದಲ್ಲಿ
ದಿಟ್ಟಿಸಿ ಎಣಿಸಲು ಚುಕ್ಕಿಗಳಿದ್ದಾವೆ
(೦೨-ಜನವರಿ-೨೦೦೯)
ಯಾರನ್ನೂ ಯಾವುದನ್ನೂ ಲೆಕ್ಕಿಸದ ಕಾಲದ ಲೆಕ್ಕದಲ್ಲಿ ಇನ್ನೂ ಒಂದು ಅಂಕೆ ಸವೆದಿದೆ. ಕಳೆದ ಕಾಲವೆಲ್ಲವನ್ನೂ ಕಳೆದುಕೊಳ್ಳದೆ ಕಲಿತುಕೊಳ್ಳುತ್ತಾ ಮುಂದೆ ಸಾಗುವುದರಲ್ಲಿ ಸಮಯದ ಸಾರ್ಥಕತೆಯನ್ನು ಕಂಡುಕೊಂಡರೆ ಮನುಜಮತಕ್ಕೇ ಹಿತವಲ್ಲವೆ?
ಹೊಸತೊಂದರ ಆರಂಭ ಎಲ್ಲ ಹಿತ ಸುಖಗಳಿಗೆ ನಾಂದಿಯಾಗಲಿ. ಜಗಜೀವನ ಮಂಗಳವಾಗಲಿ.
ಎಲ್ಲ ಗದ್ದಲಗಳ ನಡುವೆಯೂ
ಮತ್ತದೇ ಸೂರ್ಯ, ಹಗಲು, ಬೆಳಕು;
ಗೋಡೆ ಮೇಲಿನ ಚಿತ್ರ ಮಾತ್ರ ಹೊಸದು
ಸುತ್ತೆಲ್ಲ ಅದೇ ರಾಗ, ಅದೇ ತಾಳ, ಅದೇ ಹಾಡು
ಪಲ್ಲವಿಯಲ್ಲೇ ತಿರುಗಣೆ
ಮುಂದೇನು? ಪ್ರಶ್ನೆಗಳಿವೆ ಹಲವಾರು
ಕೇಳಿದವರಿಗಂತೂ ಉತ್ತರ ತಿಳಿಯದು
ಕೇಳಿಸಿಕೊಂಡವರಿಗೆ ಅವರದೇ ತಲೆನೋವು
ತರಾವರಿ ಗುಳಿಗೆಗಳು ಮಾರಾಟಕ್ಕಿವೆ, ಕೊಳ್ಳುವವರಿಲ್ಲ
ಹೊಸತನದ ಗಾಳಿಯಲ್ಲಿ ಗುಂಡುಗಳ ಹಾರಾಟ
ಮೂಗಿನೊಳಗೆ ಗೊಂದಲದ ಹೊಗೆ
ಉಸಿರಿನ ವಿಷ ಬೆನ್ನಲ್ಲಿ ಕಾಣದು
ಕೊಪ್ಪರಿಗೆಯೊಳಗೇ ಕ್ರೂರಿಗಳ ಸಾಮ್ರಾಜ್ಯ
ಕೊಳ್ಳುಬಾಕನ ಹೆಣದಡಿಯಲ್ಲೂ ಹೂಳುವ ಗುತ್ತಿಗೆ
ಕತ್ತಿ ಹಿಡಿದವನ ಕೈ ಕಾಣದ ಸಾಮಾನ್ಯ ಕುತ್ತಿಗೆ
ಎಷ್ಟು ನೋವಿಗೆ ಎಷ್ಟು ನಲಿವು
ಲೆಕ್ಕ ಇಟ್ಟವರಿದ್ದೀರಾ?
ಎಲ್ಲಿಯ ಸ್ವಾರ್ಥಕ್ಕೆ ಎಲ್ಲಿಯ ಬಲಿ
ಸೂತ್ರ ಹಿಡಿದವರಿದ್ದೀರಾ?
ಯಾರ ನೆರಳಿಗೆ ಯಾರ ಜೀವ
ಸೂಕ್ಷ್ಮ ಕಂಡವರಿದ್ದೀರಾ?
ಗಾಳಿಗೋಪುರದಂಥ ಅರಗಿನರಮನೆಗಳು
ನೆಲಕಚ್ಚಿದಾಗಿಂದ ಕೆಚ್ಚಿನ ಕೆಸರಲ್ಲೂ
ಕುಸಿದದ್ದೇ ಬಂತು, ಕಿಸಿದದ್ದೇ ಬಂತು
ಜಾರಿದವರೆಲ್ಲ ಜಾಣರಾಗಲಿಲ್ಲ
ಎದ್ದ ಜಾಣರ ಹೆಸರು ಕಾಣಲೇ ಇಲ್ಲ
ಸುಖನಿದ್ರೆ ಎಲ್ಲರ ಸೊತ್ತಲ್ಲ
ಮತ್ತದೇ ಚಂದ್ರ, ಇರುಳು, ಕತ್ತಲು
ಅಷ್ಟಾದರೂ, ಕಂಡಷ್ಟೇ ಆಕಾಶದಲ್ಲಿ
ದಿಟ್ಟಿಸಿ ಎಣಿಸಲು ಚುಕ್ಕಿಗಳಿದ್ದಾವೆ
(೦೨-ಜನವರಿ-೨೦೦೯)
Labels:
ಆತ್ಮ ಚಿಂತನ...,
ಹೀಗೇ ಸಾಗಲಿ,
ಹೊಚ್ಚ ಹೊಸದು
Subscribe to:
Posts (Atom)