ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday 5 September, 2008

ಶಿಕ್ಷಕ

ಭಾಗ ೧:-- ಶಿಕ್ಷಕ ಹೀಗಾದರೆ?

ಶಿಕ್ಷಕ ತಕ್ಷಕನಾದರೆ ಮನುಕುಲಕ್ಕೆ-
ಅಮೃತವುಣಿಸುವವರಾರು?
ಶಿಕ್ಷಕ ಭಕ್ಷಕನಾದರೆ ಬೆಳೆವ-
ಸಿರಿಯ ಮೊಳಕೆಗೆ ರಕ್ಷಕರಾರು?

ಶಿಕ್ಷಕ ವಂಚಕನಾದರೆ ನವಯುಗದ-
ಭವಿತವ್ಯದ ಹಿತಚಿಂತಕರಾರು?
ಶಿಕ್ಷಕ ಅಚೇತನನಾದರೆ ಭಾರತಮಾತೆಯ-
ಕೀರ್ತಿಪತಾಕೆಯ ಚೈತನ್ಯವಾರು?

ಭಾಗ ೨:-- ಶಿಕ್ಷಕ ಹೇಗಿರಬೇಕು?

ತಕ್ಷಕನಾಗಿ ಭಕ್ಷಕರನ್ನು ಎದುರಿಸಿ ನಿಲಬೇಕು,
ರಕ್ಷಕನಾಗಿ ನವಯುವಶಕ್ತಿಗೆ ಧೈರ್ಯವ ಕೊಡಬೇಕು.

ಚೇತನವಾಗಿ ಮುಗ್ಧ ಮನಸಿಗೆ ಜಾಗೃತಿ ತರಬೇಕು,
ಚಿಂತನಶೀಲ ತರುಣಗಣಕ್ಕೆ ಪ್ರಣತಿಯಾಗಬೇಕು.

ಮಮತೆ, ಕರುಣೆ, ವಾತ್ಸಲ್ಯಗಳ ಚಿಲುಮೆಯಾಗಬೇಕು,
ಭಾರತಮಾತೆಯ ಕೀರ್ತಿಪತಾಕೆಗೆ ಭದ್ರ ಬುನಾದಿಯಾಗಬೇಕು.
(ಆಗಸ್ಟ್-೧೯೯೨)

(ಬೆಂಗಳೂರಿನ ವಿಜಯಾ ಶಿಕ್ಷಕರ ತರಬೇತಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನನ್ನ ಸಹಪಾಠಿಗಳ ಧೋರಣೆ, ಸುತ್ತಮುತ್ತಲ ಶಾಲೆಗಳಿಗೆ ಕಲಿಕೆ-ಪಾಠಗಳಿಗೆಂದು ಹೋಗುತ್ತಿದ್ದಾಗ ಅಲ್ಲಿನ ಶಿಕ್ಷಕರ ಧೋರಣೆ ಕಂಡು ಬೇಸರದಿಂದಲೂ ಹತ್ತಿರ ಬರುತ್ತಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭವೆಂತಲೂ ಗೀಚಿಕೊಂಡದ್ದು. ಈಗ ಮತ್ತೊಮ್ಮೆ, ಈ ಕವನದ ಮೂಲಕ ನಮ್ಮೆಲ್ಲಾ ಶಿಕ್ಷಕವರ್ಗಕ್ಕೆ ವಂದನೆಗಳು.)