ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 20 May, 2008

ಗೆಳೆಯನಿಗೆ....

Monday, July 9, 2007

ನನ್ನ ಹೃದಯ ಪೀಠದಲಿ ನಿನ್ನ ಪ್ರತಿಮೆ ನಿಲ್ಲಲಿ,
ನನ್ನ ಜಿಹ್ವೆಯಲಿ ನಿನ್ನ ಮಧುರ ನಾಮ ನಲಿಯಲಿ,
ನನ್ನ ಮನದಿ ಸದಾ ನಿನ್ನ ಮುದ್ದು ಮೊಗವು ತೇಲಲಿ,
ದಿನದಿನವೂ ಅನುಕ್ಷಣವೂ ನಿನ್ನ ನೆನಹು ಚಿಮ್ಮಲಿ.

ಆಕಾಶದ ನೀಲಿವರ್ಣ ನಿನ್ನ ದೇಹ ವರ್ಣವೆ?
ಆ ಸೂರ್ಯ ಚಂದ್ರರೇನು ನಿನ್ನ ಅಕ್ಷಿಪಟಗಳು?
ಬಾನತಾರೆ ಸೇರಿ ನೇಯ್ದುದೇನು ನಿನ್ನ ಉಡುಗೆಯು?
ತಂಗಾಳಿಯು ಮಧುರವಾಗಿ ಉಸುರುತಿಹುದೆ ಒಸಗೆಯು?

ವಸಂತನಾಗಮನ ತಂದಿಹುದು ಸಂತಸ,
ಜೀವಭಾವದಲೆಗಳಿಂದ ತುಂಬಿಹುದು ಮಾನಸ,
ಆ ಭಾವನೆಗಳ ಕಂಪು ಎಷ್ಟು ಮಧುರ ಬಲ್ಲೆಯಾ?
ಹಂಚಿಕೊಳಲು ಬಾರೆಯಾ, ಓ ಮುದ್ದು ಗೆಳೆಯಾ?
(ಎಪ್ರಿಲ್-೧೯೮೫)
[ನನ್ನ ಮೊದಲ ಪ್ರೇಮ ಕವನ, ಕಲ್ಪಿತ ಗೆಳೆಯನಿಗೆ ಅರ್ಪಿತ]
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:14 PM
Labels: ,

21 ಪತ್ರೋತ್ತರ:
Jagali Bhagavata said...
ಸುಪ್ತದೀಪ್ತಿ,
೨೦೦೭ರಲ್ಲಿ ಈ ರೀತಿ ಮೊದಲ ಪ್ರೇಮ ಕವಿತೆ ಬರೆದ/ಬರೆಯುತ್ತಿರುವ ಕವಯತ್ರಿಯರು ಗೊತ್ತಾ ನಿಮಗೆ? ಗೊತ್ತಿದ್ರೆ ತಿಳಿಸಿ:-))
July 9, 2007 8:41 PM

suptadeepti said...
೨೦೦೭'ರಲ್ಲಿ ಹೀಗೆ ಬರೆಯುವವರಿಗೆ "ಗೂಬೆ" ಅಂತಾರೆ ಕಣಪ್ಪಾ!!
July 9, 2007 8:42 PM

ಸುಶ್ರುತ ದೊಡ್ಡೇರಿ said...
ನಾನು ಹುಟ್ಟೋಕಿಂತ ಒಂದು ತಿಂಗ್ಳು ಮುಂಚೆ ಬರ್ದಿದೀರ ನೋಡಿ ನೀವು ಈ ಕವಿತೆ!
July 9, 2007 11:58 PM

suptadeepti said...
ಏಯ್ ಸುಶ್, ನಾನು ಈ ಕವಿತೆ ಬರ್ದಿದ್ದಕ್ಕೆ ನೀನು ಹುಟ್ಟಿದ್ದು ಅಂತ ಹೇಳ್ಲಿಲ್ವಲ್ಲ! ಸದ್ಯ, ಬದುಕಿದೆ...!
July 10, 2007 12:02 AM

December Stud said...
ಚೆನ್ನಾಗಿದೆ... ಆದರೆ ಮೊದಲನೆಯ ಪ್ರೇಮಗೀತೆ ಅಂತ ಹೇಳಬಹುದು. ನಂತರದ ಕವಿತೆಗಳಲ್ಲಿ ಕಾಣುವ ನಿಮ್ಮ ಛಾಪು ಇದರಲಿಲ್ಲ. ಕಲ್ಪನೆ = ಪ್ರೇರಣೆ?
July 10, 2007 12:26 AM

sritri said...
ಆಕಾಶದ ನೀಲಿವರ್ಣ ನಿನ್ನ ದೇಹ ವರ್ಣವೆ?
- ಶ್ರೀ ಕೃಷ್ಣನನ್ನೇ ಕಾಲ್ಪನಿಕ ಗೆಳೆಯನನ್ನಾಗಿಸಿ ಬರೆದ ಪ್ರೇಮ ಕವನ ಚೆನ್ನಾಗಿದೆ.
..................................
ಇನ್ನೇನೋ ಹೇಳಬೇಕೆನಿಸುತ್ತಿದೆ. ಆದರೆ ಇಲ್ಲಲ್ಲ!
July 10, 2007 7:43 AM
ಶ್ರೀವತ್ಸ ಜೋಶಿ said...
How about some ತರಲೆ as usual? :-)
ಅ) ಒಟ್ಟು 12 ಸಾಲುಗಳ ಕವನದಲ್ಲಿ 4 ಆಜ್ಞಾರ್ಥಕ, 6 ಪ್ರಶ್ನಾರ್ಥಕ. 2 ಮಾತ್ರ affirmative! ಹಾಗಿರಬಾರದೆಂದೇನೂ ಅಲ್ಲ, just some stastistics ಅಷ್ಟೇ.
ಆ) ಹೃದಯದಲಿ ಪ್ರತಿಮೆ ನಿಂತ ಮೇಲೆ, ಮನದಿ ಮುದ್ದು ಮೊಗ ಮಾತ್ರ ತೇಲಬೇಕೇ? ಅಂದರೆ ಆಗ ಹೃದಯದಲಿ ನಿಂತ ಪ್ರತಿಮೆ ’ಮೊಗ ರಹಿತ’ ವಾಗಿರುತ್ತದೆ!?
ಇ) "ಮೊದಲ ಪ್ರೇಮ ಕವನ" ಎನ್ನುವಲ್ಲಿ ’ಮೊದಲ’ ಎಂಬ ವಿಶೇಷಣವು ’ಪ್ರೇಮಕವನ’ಕ್ಕೋ, ’ಪ್ರೇಮ’ಕ್ಕೋ, ’ಕವನ’ಕ್ಕೋ ಎಂದು ಸ್ವಲ್ಪ ಗೊಂದಲ (ambiguity)!
July 10, 2007 1:43 PM

Anonymous said...
ಜಗಲಿಗೊಂದು ಗೂಬೆನಾದ್ರು ಬರಲಿ, ಅಲ್ದೇ ಭಾಗವತ್ರೆ?
July 10, 2007 3:04 PM

Anonymous said...
ಕ್ರಿಷ್ಣಂಗೆ ನೀವು ನಿಮ್ಮಮೊದಲ ಪ್ರೇಮ ಕವನ ಅರ್ಪಿಸಿದ್ದಕ್ಕೆ "ಶಿವನಿಗೆ"ಬೇಜಾರಾಯ್ತಂತೆ
-ಮಾಲಾ
July 10, 2007 4:24 PM

suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.

@ DS: ಧನ್ಯವಾದಗಳು. ಕಲ್ಪನೆ=ಪ್ರೇರಣೆ ಅಲ್ಲ!!

@ ಶ್ರೀತ್ರಿ: ಕೃಷ್ಣ ಅಂತ ಚೆನ್ನಾಗಿಯೇ ಊಹಿಸಿದ್ದೀಯ. ಹದಿ-ಹೃದಯಕ್ಕೆ ಲಗ್ಗೆಯಿಡುವ ಆ ದೇವನನ್ನೇ ಮೊದಲು ಕರೆದದ್ದು ನಾನು.

@ ಶ್ರೀವತ್ಸ ಜೋಶಿ: ತರಲೆ ಪ್ರಶ್ನೆಗಳು, ವಿವರಣೆಗಳು... ಪರವಾಗಿಲ್ಲ, ಶೂಟಿಸುತ್ತಿರಿ. ಉತ್ತರ ಕೊಡಲೇಬೇಕಾದ ಒತ್ತಡ ಇರಲ್ಲ ಅಂದುಕೊಳ್ಳುತ್ತೇನೆ.

@ ಅನಾನಿಮಸ್: ಭಾಗವತರಿಗೆ ಗೂಬೆ ಸಾಕು ಅಂತಲಾ ನಿಮ್ಮ ಅಭಿಪ್ರಾಯ?

@ ಮಾಲಾ: ಶಿವನನ್ನು ಪೂಜಿಸಲು ಶುರುಮಾಡುವ ತುಂಬಾ ಮೊದಲೇ ಕೃಷ್ಣನನ್ನು ಮೆಚ್ಚಿ, ಆರಾಧಿಸುತ್ತಿದ್ದರಿಂದ ಶಿವನಿಗೆ ಬೇಜಾರಾಗೋ ಪ್ರಸಂಗವೇ ಇಲ್ಲ.
July 10, 2007 6:20 PM

yaatrika said...
ಸುಪ್ತದೀಪ್ತಿ. ಕವನ ಕೃಷ್ಣನಿಗೆ ಅರ್ಪಿಸಿದ್ದು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಓದಿದಾಗ, ಪುನಃ ಓದಿದಾಗ ಆ ಮುದ್ದುಬಂಗಾರನೇ ನನ್ನ ಕಲ್ಪನೆಗೆ ಬರುತ್ತಿದ್ದ. ನೀವೂ ಅವನನ್ನೇ ಕುರಿತು ಬರೆದದ್ದು ತಿಳಿದು ಆನಂದವಾಯಿತು. ತತ್ವದೊಡನೆ ಭಾವದ ಸಂಗಮ. ದಾಸರು ಭಾವಗೀತೆ ಬರೆತಂತಿದೆ. ಉತ್ಕೃಷ್ಟಮಟ್ಟದ ’ಚೊಚ್ಚಲ ಕವನ’ ಸರಿಯಾದ ಜಾಗವನ್ನೇ ತಲುಪಿತು. :)
July 10, 2007 9:33 PM

suptadeepti said...
@ಯಾತ್ರಿಕ: ಪ್ರತಿಕ್ರಿಯೆಗೆ ಧನ್ಯವಾದಗಳು. ಆ ಮುದ್ದು ಬಂಗಾರ ಯಾರಿಗೆ ಬಂಧುವಲ್ಲ, ಹೇಳಿ? ಬಂಧನ ಬಿಡಿಸಬೇಕಾದ ಅವನೇ ಬಂಧಿಸುವ ಪರಿ ಅವನದು.
July 10, 2007 9:42 PM

minugutaare said...
very good letter. keep it up.
July 11, 2007 2:05 PM

suptadeepti said...
ನನ್ನ ಪುಟ್ಟ ಅಕ್ಷರಲೋಕಕ್ಕೆ ಸ್ವಾಗತ, ಮಿನುಗುತಾರೆ. ಹೀಗೇ ಬರುತ್ತಿರಿ, ಪ್ರತಿಕ್ರಿಯೆ ಬರೆಯುತ್ತಿರಿ.
July 11, 2007 3:11 PM

Anonymous said...
ಭಾಗವತರ ಮೇಲೆ ಯಾಕೆ ಗೂಬೆ ಕೂರಿಸ್ತಾ ಇದೀರಿ? ತುಂಬ ಒಳ್ಳೆ ಜನ ಅವ್ರು.
July 11, 2007 7:54 PM

Anonymous said...
ಗೂಬೆಯನ್ನ ಹುಡುಕ್ಲಿಕ್ಕೆ ನಿಮ್ಮನ್ನ ಭಾರತಕ್ಕೆ ಅಟ್ಟುತ್ತಾ ಇದಾರಂತೆ. ನಿಜವೇ?
July 11, 2007 7:56 PM

suptadeepti said...
ಅನಾಮಿಕರಿಬ್ಬರಿಗೂ ನಮಸ್ಕಾರ. ಭಾರತಕ್ಕೆ ಗೂಬೆ ಹುಡುಕಲು ನನ್ನನ್ಯಾರೂ ಅಟ್ಟುತ್ತಿಲ್ಲ ಅಂತ ಸ್ಪಷ್ಟೀಕರಿಸುತ್ತೇನೆ. ಹಾಗೂ ಭಾಗವತರ ಜಗಲಿಗೆ ಗೂಬೆಯಾದರೂ ಸಾಕು ಅಂತ ಇನ್ನೊಬ್ಬ ಅನಾಮಿಕರ ಹೇಳಿಕೆಗೆ ನನ್ನ ಪ್ರಶ್ನೆಯಿದೆಯೇ ಹೊರತು ಸಮ್ಮತಿ ಅಲ್ಲ. ಇವೆಲ್ಲ ಗೊಂದಲಗಳು ಯಾಕೆ? ಭಾಗವತರು ಖಂಡಿತಾ ಒಳ್ಳೆ ಜನವೇ, ಅವರಿಗೆ ಗೂಬೆಯೂ ಬೇಡ. ಗೂಬೆ ಪಟ್ಟವೂ ಬೇಡ. ಗೊಂಬೆಯನ್ನು ಹುಡುಕೋಣವೇ?
July 11, 2007 11:38 PM

Anonymous said...
ಭಾಗವತರು ಆಮೇಲೆ- 'ಗಜಮುಖನೆ ವಂದಿಸುವೆ..' ಅನ್ನೋದು ಬಿಟ್ಟು 'ಗೊಂಬೆ ಗೊಂಬೆ ಗೊಂಬೆ, ನಿನ್ನ ಮುದ್ದಾಡಬೇಕು ನನ್ನ ಗೊಂಬೆ...' ಅಂತ ಪ್ರಸಂಗ ಶುರು ಮಾಡ್ತಾರೆ ;-)
July 12, 2007 8:34 AM

suptadeepti said...
ಯಾಕೆ ಅನಾನಿಮಸರೇ, ಹೊಸ ಪ್ರಸಂಗ ಬೇಡ್ವಾ? ಆಗಲಿ ಬಿಡಿ. ಕಂಡು, ಕೇಳಿ, ಆನಂದಿಸೋಣ; ಆಗದಾ? ಅದೆಲ್ಲ ಇರಲಿ, ನೀವಿನ್ನೂ ತೆರೆಮರೆಯಿಂದ ಹೊರಗೆ ಬಂದಿಲ್ಲ; ಅಷ್ಟೂ ಭಯವಾ, ಹೇಗೆ?
July 12, 2007 12:40 PM

Anonymous said...
ಇಂದು ಭಾರತಕ್ಕೆ ಹೊರಡುತ್ತಿರುವ ಸುಪ್ತದೀಪಿಯವರಿಗೆ ಆತ್ಮೀಯ ಸ್ವಾಗತ!!
July 13, 2007 9:20 AM

ಮನಸ್ವಿನಿ said...
ಸುಪ್ತದೀಪ್ತಿ
ಗೊಂಬೆ ಸಿಕ್ಕ ಮೇಲೆ ಇಲ್ಲೆ ಪ್ರಕಟಿಸಿ... ಭಾಗವತ್ರು ಬಾಯಿ ಮುಚ್ಚುತ್ತಾರೋ, ಇನ್ನೇನಾದ್ರು ರಾಗ ಎಳಿತಾರೋ ನೋಡೋಣ :)
July 14, 2007 10:54 AM

No comments: