ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 19 May, 2008

ಅಮ್ಮನ ದಿನದ ಕವನಗಳಿಗೆ ಒಂದು ವಿವರಣೆ:

Tuesday, May 15, 2007

ಈ ಎರಡೂ ಕವನಗಳನ್ನು ನಾನು ನನ್ನನ್ನು ಹೆತ್ತ ಅಮ್ಮನಿಗಾಗಿಯೇ ಬರೆಯಲಿಲ್ಲ ಅಂದರೆ ಅಚ್ಚರಿಯಾಗಬಹುದು, ಅಲ್ಲವೆ?

"ಜನನಿ" ಕವನ ನಮ್ಮೆಲ್ಲರ, ಈ ಜಗದ, ಜೀವಕೋಟಿಯ, ಅಮ್ಮನಾಗಿರುವ "ಸಾಗರ"ದ ಬಗೆಗಾದರೆ, "ಸ್ಮರಣೆ" ಕವನ ಬರೆದದ್ದು ಅಮ್ಮ ಭಾರತಾಂಬೆಯ ಸ್ಮರಣೆ ಕಾಡಿದಾಗ. ಇಬ್ಬರು ಓದುಗರು ನನಗೆ ಇವನ್ನು ಹೆತ್ತಮ್ಮನ ಬಗೆಗೆಂದು ತಿಳಿದು ಪ್ರತಿಕ್ರಿಯಿಸಿದಾಗ ನನಗೂ ಹೊಳೆದದ್ದು, "ಹೌದಲ್ಲಾ!" ಎಂದು.

ಈಗ, ಈ ಹಿನ್ನೆಲೆಯನ್ನಿರಿಸಿಕೊಂಡು ಮತ್ತೊಮ್ಮೆ ಕವನಗಳನ್ನು ಓದಿ ಏನನಿಸುತ್ತೋ ಹೇಳಿ.
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 9:40 PM
Labels:

8 ಪತ್ರೋತ್ತರ:
parijata said...
ಸುಪ್ತದೀಪ್ತಿಯವರೇ,
ವಿವರಣೆಗಾಗಿ ಧನ್ಯವಾದಗಳು. ಹೆತ್ತಮ್ಮನ ಬಗ್ಗೆ ಎಂದು ಓದಿದರೂ ಪದ್ಯಗಳು ಬಹಳ ಸುಂದರವಾಗಿವೆ. "ಶತಶತಕಗಳ ಇರುವಿಕೆಯ ಆಧಾರ್" ಎಂದಾಗ ಪ್ರಕೃತಿಯ ಬಗ್ಗೆಯೇನೋ ಅನ್ನಿಸಿತು. ಆಮೇಲೆ ಗೊತ್ತಾಯಿತು. ಎರಡನೆಯ ಪದ್ಯದ "ಮತ್ತೆ ಮರುಕಳಿಸುವುದು ಹೊತ್ತವಳ ನೆನಹು ..." ಬಹಳ ಇಷ್ಟವಾಯಿತು. ಅಲ್ಲಿದ್ದಾಗ ಈ ಪದ್ಯದಲ್ಲಿನ ಭಾವನೆಗಳೇ ನನ್ನಲ್ಲೂ ಬರುತ್ತಿದ್ದವು. 'ಅಮ್ಮ'ನ ಬಗ್ಗೆ ಇನ್ನೂ ಬಹಳ ಪ್ರೀತಿ ಇರುವುದಾದರೂ, ವಾಪಸ್ಸು ಬಂದ ಮೇಲೆ ಆ ಭಾವುಕತೆ ಕಡಿಮೆಯಾಗಿಹೋಗಿದೆ ಎನ್ನಿಸುತ್ತದೆ. ಇಲ್ಲಿಯ ವಿವೇಚನೆಯಿಲ್ಲದ "ಅಭಿವೃದ್ಧಿ", ಟ್ರಾಫಿಕ್ ಎಲ್ಲವನ್ನೂ ನೋಡಿ ನೋಡಿ ಬಹಳ ಬೇಸರವಾಗಿಹೋಗಿದೆ.
May 15, 2007 10:13 PM

ಸುಶ್ರುತ ದೊಡ್ಡೇರಿ said...
ಬಹುಶಃ ಕವನಗಳ ವೈಶಿಷ್ಟ್ಯವೇ ಇದು. ಕವಿ ಅದನ್ನು ಬರೆದದ್ದು ಯಾವುದರ ಬಗ್ಗೆಯಾದರೂ ಆಗಿರಬಹುದು. ಆದರೆ ಓದುಗ ಅದನ್ನು ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಂಡು ಖುಷಿಪಡಬಲ್ಲ..
ಎರಡೂ ಚೆಂದದ ಕವಿತೆಗಳು.
May 16, 2007 4:31 AM

December Stud said...
ನಿನ್ನೆ ನಿಮ್ಮೊಡನೆ ಮಾತನಾಡಿದಾಗ ಹೇಳಿದಂತೆ, ಕವಿ ಮತ್ತು ಓದುಗರ ದೃಷ್ಟಿಕೋನದಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಸದಾ....
ಆದರೆ, ಈ ಕವನಗಳ ವೈಶಿಷ್ಟ್ಯವೇನೆಂದರೆ, ಇವು ಎರಡೂ ಅರ್ಥಕ್ಕೂ ತಕ್ಕದಾಗಿವೆ. ಆದಕ್ಕೆ ನಿಮ್ಮ ಬರವಣಿಗೆಯ ಪರಿಯನ್ನು ಮೆಚ್ಚಬೇಕು.
"ಮತ್ತೆ ಮರುಕಳಿಸುವುದು ಹೊತ್ತವಳ ನೆನಹು,
ಅತ್ತು ಅತ್ತರು ಸಿಗದು, ಮತ್ತವಳ ಮಡಿಲು."
Oh man, we all yearn for that, don't we ? Still, we stay here..... beautiful lines!!!
May 16, 2007 1:03 PM

December Stud said...
ಪಾರಿಜಾತ, ಮನೆಗೆ ಹಿಂದಿರುಗಿದಾಗ ನಾವು ಕಾಣ ಬಯಸುವುದು "ನಮ್ಮ" ಮನೆಯನ್ನು. ಅಂದರೆ, ನಾವು ಬಿಟ್ಟು ಹೋಗಿದ್ದೆ, ಅಡೆ ಹರಕಲು ಮುರುಕಲು ಮನೆಯನ್ನು. ಅದಕ್ಕೆ ಬಣ್ಣ ಮೆತ್ತಿ, ಚಂದಗೊಳಿಸಿ, "ಅಭಿವೃದ್ಧಿ"ಯ ಉಡುಗೆ ತೊಡಿಸಿದರೆ, ನಮಗಾಗುವ ಕಸಿವಿಸಿ ಅಪಾರ. ಆದರೆ, "ಅಭಿವೃದ್ಧಿ"ಯ ಹೊಳೆಯನ್ನು ತಡೆಯಲು ಸಾಧ್ಯವಿಲ್ಲ. ಇದು ಅಗತ್ಯ ಕೂಡ.
At one point in history nostalgia was a major medical condition. It is something very close to heart now and we all go through it. Change is inevitable. But, I completely understand your point and agree with you. And partly, that's what scares me to return. I know, I am just like other people, coming up with cock and bull stories for not retrning :)
May 16, 2007 1:09 PM

parijata said...
DS, It is not "cock and bull stories". The problems in India are very real. (But most of the time, I do not regret our decision to move back). There is mindless destruction of trees and lakes. People flout rules like they never exist. I am concerned about the attitudes of people w.r.t the environment and other civic issues. There is no carpooling, and the traffic is horrendous. Commuting to work daily is a huge problem. That said, I think it is great for a retired or semi-retired life :) You have concerts and lectures, young people who are willing to listen, old people who are willing to teach... Life in India is very satisfying.
suptadeepti avare,Sorry for digressing. Hope you don't mind :)
May 17, 2007 11:23 PM

suptadeepti said...
ಪ್ರತಿಕ್ರಿಯಿಸಿದ ಎಲ್ಲರಿಗೆ ಮತ್ತೆ ಧನ್ಯವಾದಗಳು.
ಕವನ "ಅವರವರ ಭಾವಕ್ಕೆ" ಮತ್ತು ಅವರವರ ಅನುಭವಕ್ಕೆ ಸರಿಯಾಗಿ ಅರ್ಥ ಕೊಡುವಂಥದ್ದು, ನಿಜ. ಈ ಬ್ಲಾಗ್ ಎಂಬೋ ಅಕ್ಷರ ಲೋಕ ಇರೋದೇ ಚರ್ಚೆಗೆ. ಪ್ರಪಂಚದ ಯಾವ ಕೋಣೆಯಲ್ಲಿದ್ದರೂ ಈ ಒಂದು ಪಡಸಾಲೆಗೆ ಬಂದು ಎಲ್ಲರೊಳಗೊಂದಾಗಿ ಚರ್ಚೆ ನಡೆಸಬಹುದಾದ ವೇದಿಕೆ ಇದು. ಆದ್ದರಿಂದ ಇಲ್ಲಿ ಮುಕ್ತ ಅವಕಾಶ, ಪ್ರವೇಶ. ಚರ್ಚೆ ನಡೆಸಿದ ಎಲ್ಲರಿಗೆ ಧನ್ಯವಾದಗಳು.
May 21, 2007 11:14 PM

ಶೆಟ್ಟರು (Shettaru) said...
ನೀವೇ ಹೇಳಿದಂತೆ ಅರ್ಥೈಸಿಕೊಳ್ಳುವುದು ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ. ಉತ್ತಮ ಕವನಗಳು.
May 22, 2007 4:58 AM

suptadeepti said...
ಭೇಟಿಯಿತ್ತಿದ್ದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಶೆಟ್ಟರಿಗೆ ಧನ್ಯವಾದಗಳು. ಹೀಗೇ ಬರುತ್ತಿರಿ.
May 22, 2007 11:34 PM

No comments: