ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 20 January, 2009

ಜೀವನ್ಮುಖಿ

ಮನದಿ ನೋವ ಹುದುಗಿ ಮೇಲೆ
ತಂದ ಒಂದು ನಗುವಿಗೆ-

ಬರಗಾಲದ ಬಿರುಕಿನಲ್ಲು
ಹೊರಟ ಹಸುರ ಕುಸುರಿಗೆ-

ಒಂದೆ ಗುಕ್ಕ ಎರಡು ಕೊಕ್ಕಿ-
-ಗಿತ್ತು ನಲಿವ ಕರುಳಿಗೆ-

ಚಿಂದಿಯಲ್ಲೆ ಮುದುರಿಕೊಂಡು
ಕಾವಲಿಡುವ ಮಮತೆಗೆ-

ಅಗ್ನಿಹೋತ್ರಿಯಾಗಿ ನಿಂತು
ತಂಪನೆರೆವ ತರುವಿಗೆ-

ಕತ್ತಲಲ್ಲಿ ಬಿಕ್ಕು ಬೆರೆಸಿ
ದಿನದಿ ಬಿರಿವ ಕಂಪಿಗೆ-

ಯಾವ ಬಿರುದು ಹೆಸರು ಇರದೆ
ತುಡಿಯುವೆದೆಗೆ ಅರ್ಪಣ
(೦೪-ಜುಲೈ-೨೦೦೩)

(ಯಾವ್ಯಾವುದೋ ಕಾರಣ-ಒತ್ತಡಗಳಿಗೆ ಸಿಲುಕಿ ಮಕ್ಕಳನ್ನು ಸಾಕಿ ಬೆಳೆಸುವ ಜವಾಬ್ದಾರಿ ಹೊರುವ 'ಒಂಟಿ ಎತ್ತಿನ ಗಾಡಿ'ಗಳಾದ "ಸಿಂಗಲ್ ಪೇರೆಂಟ್ಸ್" ಬಗ್ಗೆ)

6 comments:

Anonymous said...

ಅಗ್ನಿಹೋತ್ರಿಯಾಗಿ ನಿಂತು
ತಂಪನೆರೆವ ತರುವಿಗೆ ...

ಒಂಟಿ ಪೋಷಕರ ಕಷ್ಟಗಳನ್ನೆಲ್ಲಾ ಇದೊಂದೇ ಸಾಲು ಕಟ್ಟಿಕೊಟ್ಟಿದೆ!

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗೆ ಧನ್ಯವಾದ ವೇಣಿ.

sunaath said...

Once again a beautiful poem.
ಅಭಿನಂದನೆಗಳು, ಜ್ಯೋತಿ.

ಸುಪ್ತದೀಪ್ತಿ suptadeepti said...

ಪ್ರೀತಿಗೆ ವಂದನೆಗಳು ಕಾಕಾ.

urbhat [Raj] said...

’ಸಿಂಗಲ್ ಪೇರೆಂಟ್ಸ್’ ಬಗ್ಗೆ ಬರೆದದ್ದು ಚೆನ್ನಾಗಿದೆ.... ಬರೀ ’ಸಿಂಗಲ್ಸ್’ ಬಗ್ಗೆ... ಎನಾದ್ರೂ ಇದೆಯಾ..? :-)

ಸುಪ್ತದೀಪ್ತಿ suptadeepti said...

ಅಂಥ ಒಂದು ಕವನವೂ ಇದೆ. ಆದ್ರೆ ನಿನಗಂತೂ ಪ್ರಸ್ತುತ ಇಲ್ಲ ಅದು ಈಗ (ಕವನದ ಸಂದರ್ಭ ಬೇರೆ ಥರ ಇದೆ!).