ಮುಂದಲಿಗೆಯ ಅಂಚಿನಲ್ಲಿ
ಒಂದು ಚಿಲುಮೆ ಹೊರಳು
ನೆಳಲು ಬೆಳಕಿನಾಟದಲ್ಲಿ
ನಿನ್ನ ಘಲಿಲು ಘಲಿಲು
ಇಟ್ಟ ಹೆಜ್ಜೆ ಜಾಡಿನಲ್ಲಿ
ಬಳ್ಳಿ ನಡೆಯ ಕುರುಹು
ಸುತ್ತ ಸರಿವ ನಾಡಿಯಲ್ಲಿ
ಜೀವಸೆಲೆಯ ಹೊಳಹು
ಎತ್ತಲಿರುವ ಭಾರದರಿವು
ಇರದ ಪುಟ್ಟ ಮುಕುಟ
ಎದ್ದುನಿಂತ ಧೀರನಂತೆ
ಬೆಣ್ಣೆ ಮುದ್ದೆ ಬೆಟ್ಟ
ಘಲ್ಲು ಗುಲ್ಲು ಮನೆಯಲೆಲ್ಲ
ತುಂಬಿಸಿರುವ ನಡಿಗೆ
ಈಗ ಮೌನದಾಟವಲ್ಲ
ನೋಟ ಬೇಕು ಅಡಿಗೆ
ಕಾಣದೊಂದು ಕೋಣೆಯಲ್ಲಿ
ಎಳೆಯ ಬಿಸಿಲ ಕೋಲು
ಬೆಳಗುತಿರಲಿ ಬಾಳಿನಲ್ಲಿ
ಎಡವದಿರಲು ಕಾಲು
(ಚಿತ್ರ-ಕವನ ಬ್ಲಾಗಿನಲ್ಲಿ ಚಿತ್ರವೊಂದಕ್ಕೆ ಬರೆದದ್ದು)
(೨೬-ಫೆಬ್ರವರಿ-೨೦೦೮)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Saturday, 21 November 2009
Subscribe to:
Post Comments (Atom)
3 comments:
ಮತ್ತೊಂದು ಭಾವನಾಮಯ ಕವನ. ಈ ಕವನಕ್ಕೆ ಕಾರಣವಾದ ಆ ಚಿತ್ರಕ್ಕೆ ನನ್ನ ಧನ್ಯವಾದಗಳು!
ಅಕ್ಷರಗೊಳಡನೆಯ ತಮ್ಮ ಹೊಸಕಾಟ ವಿನೂತನ. -ಬೆಣ್ಣೆ ಮುದ್ದೆ ಬೆಟ್ಟ, ಹೊರಳು, ಮು೦ದಲಿಗೆ, ಭಾರದರಿವು.-ಹೀಗೆ ಸಾಮಾನ್ಯ ಶಬ್ದಗಳನ್ನು ಪ್ರಾಸಕ್ಕೆ ನುರಿಸುವ ತಮ್ಮ ಪರಿ ಅಸಾಮಾನ್ಯ.
ಸುನಾಥ್ ಕಾಕಾ,
ವಂದನೆಗಳು. ಚಿತ್ರಕವನ ಬ್ಲಾಗಿನಲ್ಲಿನ ಕೆಲವೇ ಕೆಲವು ಚಿತ್ರಗಳಿಗೆ ಕವನ ಬರೆದಿದ್ದೇನೆ, ಅಷ್ಟೇ. ಇತ್ತೀಚೆಗೆ ಅತ್ತ ಸುಳಿದಿಲ್ಲ.
ಸೀತಾರಾಮ್ ಸರ್,
ನಿಮಗೂ ಧನ್ಯವಾದಗಳು. ಹೊಸಕಾಟವಲ್ಲ; ಓದುಗರಿಗೆ ಹೊಸ ಕಾಟ! ಅಲ್ಲವೆ?
Post a Comment