ಮನದಿ ನೋವ ಹುದುಗಿ ಮೇಲೆ
ತಂದ ಒಂದು ನಗುವಿಗೆ-
ಬರಗಾಲದ ಬಿರುಕಿನಲ್ಲು
ಹೊರಟ ಹಸುರ ಕುಸುರಿಗೆ-
ಒಂದೆ ಗುಕ್ಕ ಎರಡು ಕೊಕ್ಕಿ-
-ಗಿತ್ತು ನಲಿವ ಕರುಳಿಗೆ-
ಚಿಂದಿಯಲ್ಲೆ ಮುದುರಿಕೊಂಡು
ಕಾವಲಿಡುವ ಮಮತೆಗೆ-
ಅಗ್ನಿಹೋತ್ರಿಯಾಗಿ ನಿಂತು
ತಂಪನೆರೆವ ತರುವಿಗೆ-
ಕತ್ತಲಲ್ಲಿ ಬಿಕ್ಕು ಬೆರೆಸಿ
ದಿನದಿ ಬಿರಿವ ಕಂಪಿಗೆ-
ಯಾವ ಬಿರುದು ಹೆಸರು ಇರದೆ
ತುಡಿಯುವೆದೆಗೆ ಅರ್ಪಣ
(೦೪-ಜುಲೈ-೨೦೦೩)
(ಯಾವ್ಯಾವುದೋ ಕಾರಣ-ಒತ್ತಡಗಳಿಗೆ ಸಿಲುಕಿ ಮಕ್ಕಳನ್ನು ಸಾಕಿ ಬೆಳೆಸುವ ಜವಾಬ್ದಾರಿ ಹೊರುವ 'ಒಂಟಿ ಎತ್ತಿನ ಗಾಡಿ'ಗಳಾದ "ಸಿಂಗಲ್ ಪೇರೆಂಟ್ಸ್" ಬಗ್ಗೆ)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Tuesday, 20 January 2009
Wednesday, 14 January 2009
ರಾಗ ರಂಗು
ಚದುರಿ ಉಷೆಯ ಕುಂಕುಮ
ನೊಸಲ ತುಂಬ ಸಂಭ್ರಮ
ಹನಿದು ಮುತ್ತು ಹನಿಗಳು
ಬಯಲ ತುಂಬ ಮಣಿಗಳು
ಅರುಣ ಕದವ ತೆರೆಯಲು
ದಿವ್ಯಗಾನ ಹರಿಯಲಿ
ಕಿರಣ ಧಾರೆ ಹೊಳೆಯಲು
ಹೊನ್ನ ಗಾನ ಹೊಳೆಯಲಿ
ತುಂಬಿ ಬೆಳಕ ಬಿಂದಿಗೆ
ಬರಲಿ ಬಳುಕಿ ಮೆಲ್ಲಗೆ
ನೇಸರೇರಿ ನಲಿಯಲಿ
ಕಮಲ ಬಳುಕಿ ಅರಳಲಿ
ಚಿಗುರ ಹಸುರು ಉಸಿರಿಗೆ
ಜಗವು ರವಿಯ ಹೆಸರಿಗೆ
ಉದಯ ಕಾಲ ರಂಗಿಗೆ
ಕಾವ್ಯ ರವಿಯ ಭಂಗಿಗೆ
(೨೦-ಸೆಪ್ಟೆಂಬರ್-೧೯೯೭)
ನೊಸಲ ತುಂಬ ಸಂಭ್ರಮ
ಹನಿದು ಮುತ್ತು ಹನಿಗಳು
ಬಯಲ ತುಂಬ ಮಣಿಗಳು
ಅರುಣ ಕದವ ತೆರೆಯಲು
ದಿವ್ಯಗಾನ ಹರಿಯಲಿ
ಕಿರಣ ಧಾರೆ ಹೊಳೆಯಲು
ಹೊನ್ನ ಗಾನ ಹೊಳೆಯಲಿ
ತುಂಬಿ ಬೆಳಕ ಬಿಂದಿಗೆ
ಬರಲಿ ಬಳುಕಿ ಮೆಲ್ಲಗೆ
ನೇಸರೇರಿ ನಲಿಯಲಿ
ಕಮಲ ಬಳುಕಿ ಅರಳಲಿ
ಚಿಗುರ ಹಸುರು ಉಸಿರಿಗೆ
ಜಗವು ರವಿಯ ಹೆಸರಿಗೆ
ಉದಯ ಕಾಲ ರಂಗಿಗೆ
ಕಾವ್ಯ ರವಿಯ ಭಂಗಿಗೆ
(೨೦-ಸೆಪ್ಟೆಂಬರ್-೧೯೯೭)
Subscribe to:
Posts (Atom)