ದೀಪಗಳು ನೆರಳುಗಳು ಹಾದಿಯಲ್ಲಿ
ಬಾಳ ಬಣ್ಣದ ಕನಸು ಕಂಗಳಲ್ಲಿ
ನಿನ್ನೆ ನಾಳೆಗಳೆಂಬ ಚಿಂತೆಯಿಲ್ಲ
ಈ ಕ್ಷಣದ ಬೆಳಕಿನಲಿ ಬಾಳಬಲ್ಲ.
ಅರಿವಿರುವುದೆಂದರೆ ಅರಿವು ಅಲ್ಲ
ಕನ್ನಡಿಯ ಬಿಂಬವದು ಅವನದಲ್ಲ
ಅಕ್ಕರೆಯ ತಿಳಿಗೊಳದಿ ನಲಿವನಲ್ಲ
ಕತ್ತಲೆಯ ಪರಿಧಿಯನು ದಾಟಬಲ್ಲ.
ಚಿಣ್ಣನಾಗಿರುವನಕ ಹಗೆಯು ಅಲ್ಲ
ಬೀದಿಬದಿ ಅರಮನೆಯ ಅರಸನಲ್ಲ
ಹಗಲ ಜಗ್ಗಾಟದಲು ನಗಲು ಬಲ್ಲ
ಇರುಳ ಕೊರೆತಗಳನ್ನು ಮರೆಯಬಲ್ಲ
(೨೧-ಮೇ-೨೦೦೭)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 2 October 2008
Thursday, 11 September 2008
ಆಧಾರ ಸೂತ್ರ
ನಿನ್ನ ನೆನಪು ಮೂಡಿ ಬರಲು ಹಗುರವಾಯ್ತು ಜೀವ
ಕಣ್ಣು ತುಂಬಿ ಕಲಕಿದಾಗ ಕರಗಿತೆಲ್ಲ ಭಾವ
ಅಲ್ಲಿ ಇಲ್ಲಿ ದಿಕ್ಕು ಹುಡುಕಿ ಬಿಕ್ಕುತಿರಲು ತಾನು
ಬಲ್ಲರಾರು ಏನು, ಎತ್ತ; ಮಂಜೊಳು ಬುವಿ-ಬಾನು
ಎಲ್ಲಿ ಇದ್ದೆ, ಎಲ್ಲಿ ಎದ್ದೆ, ಅರಿಯದಿರುವ ಚಿಣ್ಣ
ಸಲ್ಲಲಹುದು ಕೆಸರಿನಲ್ಲಿ ಹೊಂದಾವರೆ ಬಣ್ಣ
ಜೀವಕೋಟಿ ಚರಾಚರದೊಳಗೆ ಮನುಜ ಭ್ರಷ್ಟ
ಭಾವಲೋಕ ಭುವನದಲ್ಲಿ ನಿತ್ಯ ಕಷ್ಟ-ನಷ್ಟ
ಕಾವ ಸತ್ಯವೊಂದೆ ಅರಿಯೊ, ಇರಲು ಸತ್ವದರಿವು
ಆವ ಬಲವು ಬೇಕಿದೆಯೊ, ಬೆಳೆಯಲಾತ್ಮ ಛಲವು!
ಪಾಂಚಜನ್ಯ ಮೊಳಗಲೀಗ- ನಡುಗಲಳ್ಳೆದೆಯು
ಸುಪ್ರಬೋಧ ಬೆಳಗಲೀಗ- ಅಡಗಲಜ್ಞತೆಯು
ತೇಜಃಪುಂಜ ಹೊಳೆಯಲೀಗ- ಉಡುಗಲೆಲ್ಲ ಕ್ರೌರ್ಯ
ಮೌಢ್ಯತೆಯನು ಕಳೆಯಲೀಗ- ಪೊಡವಿಗಾಚಾರ್ಯ
(೧೦-ಸೆಪ್ಟೆಂಬರ್-೨೦೦೧; ರಾತ್ರೆ ೧:೪೮)
(ಮಲಗಿದ್ದವಳನ್ನು ನಿದ್ರಿಸಗೊಡದೆ, ಎಬ್ಬಿಸಿ, ಈ ಕವನ "ತನ್ನನ್ನು ತಾನು ಬರೆಸಿಕೊಂಡ" ಮರುಬೆಳಗ್ಗೆಯೇ ಜಗತ್ತನ್ನು ನಡುಗಿಸಿದ ಘಟನೆ ನಡೆದದ್ದು ನನಗಿನ್ನೂ ಅರಗಿಸಿಕೊಳ್ಳಲಾಗದ ವಿಸ್ಮಯ)
ಕಣ್ಣು ತುಂಬಿ ಕಲಕಿದಾಗ ಕರಗಿತೆಲ್ಲ ಭಾವ
ಅಲ್ಲಿ ಇಲ್ಲಿ ದಿಕ್ಕು ಹುಡುಕಿ ಬಿಕ್ಕುತಿರಲು ತಾನು
ಬಲ್ಲರಾರು ಏನು, ಎತ್ತ; ಮಂಜೊಳು ಬುವಿ-ಬಾನು
ಎಲ್ಲಿ ಇದ್ದೆ, ಎಲ್ಲಿ ಎದ್ದೆ, ಅರಿಯದಿರುವ ಚಿಣ್ಣ
ಸಲ್ಲಲಹುದು ಕೆಸರಿನಲ್ಲಿ ಹೊಂದಾವರೆ ಬಣ್ಣ
ಜೀವಕೋಟಿ ಚರಾಚರದೊಳಗೆ ಮನುಜ ಭ್ರಷ್ಟ
ಭಾವಲೋಕ ಭುವನದಲ್ಲಿ ನಿತ್ಯ ಕಷ್ಟ-ನಷ್ಟ
ಕಾವ ಸತ್ಯವೊಂದೆ ಅರಿಯೊ, ಇರಲು ಸತ್ವದರಿವು
ಆವ ಬಲವು ಬೇಕಿದೆಯೊ, ಬೆಳೆಯಲಾತ್ಮ ಛಲವು!
ಪಾಂಚಜನ್ಯ ಮೊಳಗಲೀಗ- ನಡುಗಲಳ್ಳೆದೆಯು
ಸುಪ್ರಬೋಧ ಬೆಳಗಲೀಗ- ಅಡಗಲಜ್ಞತೆಯು
ತೇಜಃಪುಂಜ ಹೊಳೆಯಲೀಗ- ಉಡುಗಲೆಲ್ಲ ಕ್ರೌರ್ಯ
ಮೌಢ್ಯತೆಯನು ಕಳೆಯಲೀಗ- ಪೊಡವಿಗಾಚಾರ್ಯ
(೧೦-ಸೆಪ್ಟೆಂಬರ್-೨೦೦೧; ರಾತ್ರೆ ೧:೪೮)
(ಮಲಗಿದ್ದವಳನ್ನು ನಿದ್ರಿಸಗೊಡದೆ, ಎಬ್ಬಿಸಿ, ಈ ಕವನ "ತನ್ನನ್ನು ತಾನು ಬರೆಸಿಕೊಂಡ" ಮರುಬೆಳಗ್ಗೆಯೇ ಜಗತ್ತನ್ನು ನಡುಗಿಸಿದ ಘಟನೆ ನಡೆದದ್ದು ನನಗಿನ್ನೂ ಅರಗಿಸಿಕೊಳ್ಳಲಾಗದ ವಿಸ್ಮಯ)
Subscribe to:
Posts (Atom)