Monday, December 31, 2007
(ಅವನೇನೋ ಮುರಲಿಯನ್ನು ತೊರೆದ, ಬೃಂದಾವನವನ್ನು ಮರೆತ; ತನ್ನ ಹೊಸ ಹಾದಿ ಹಿಡಿದು ನಡೆದ. ಉಳಿದವರ ಪಾಡು...?)
ಏನೇ ರಾಧೇ, ಏನಿದು ಅಳಲು?
ಚೆಲುವ ಚೆನ್ನಿಗನ ವಿರಹದ ಮರುಳು
ತೊರೆದನೆ ನಮ್ಮನು, ಮಥುರೆಗೆ ನಡೆದನೆ,
ಬೃಂದಾವನವನು ತಟ್ಟನೆ ಮರೆತನೆ
ಆಡಿದ ಆಟವ, ಹಾಡಿದ ರಾಗವ
ಗಾಳಿಯ ಸೆಲೆಯಲಿ ತೇಲಿಸಿ ಹೊರಟನೆ.... ಏನೇ ರಾಧೇ
ತುಂಟನ ಮೋಹವು ಎಲ್ಲೆಡೆ ಹರಡಿದೆ,
ಯಮುನೆಯ ಕಲರವ ಕಣ್ಣೀರ್ ಕರೆದಿದೆ
ತಂಬೆಲರಲಿ ಬಿಸಿ ಉಸಿರೇ ಸೇರಿರೆ,
ಕುಣಿಯುವ ಮಣಕವು ಕಂಗಾಲಾಗಿದೆ.... ಏನೇ ರಾಧೇ
`ಹೇಗೇ ಬದುಕಲಿ?' ಎನ್ನದೆ ನೋಡು,
ಕಂದನ ಮರೆಯದ ಎನ್ನಯ ಪಾಡು
`ಗೋಪನ ಮಗನು ಬೆಣ್ಣೆಯ ಬೇಡುತ,
ಬರುವನು' ಎಂದಿದೆ ಕರುಳಿನ ಜಾಡು.... ಏನೇ ರಾಧೇ
(೧೬-ಮಾರ್ಚ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:20 AM
Labels: ಹೊಚ್ಚಹೊಸದು
8 ಪತ್ರೋತ್ತರ:
December Stud said...
ಒಂದೇ ಕಥೆ...ಕೋಟಿ ಕವಿತೆಗಳು...ಎಲ್ಲವೂ ಹೊಸದು...ಅಲ್ವಾ?
'Krishna' is something unique and divine!
December 31, 2007 4:15 PM
ವಿಕ್ರಮ ಹತ್ವಾರ said...
krishna, raadhe, deepti, magaLu...yaaru yaarO?!
December 31, 2007 7:38 PM
suptadeepti said...
D.S.: ಧನ್ಯವಾದಗಳು. ಕೃಷ್ಣ ಯಾಕೆ ಇಷ್ಟ ಅಂದ್ರೆ ಉತ್ತರ ಇಲ್ಲ. ಆದ್ರೆ, ಆ ತುಂಟ ಪೋರನ ಬಗ್ಗೆ ಒಲವು ಮಾತ್ರ ತೀರದು.
ವಿಕ್ಕಿ: ಇಲ್ಲಿನ ದೀಪ್ತಿ ಬೇರೆಯೇ, ನೀನು ಹೆಸರಿಸ ಹೊರಟ ವಿಚಾರ ಬೇರೆಯೇ. ಅವೆರಡೂ ಇಲ್ಲಿ ಬೆರಕೆಯಾಗಿಲ್ಲ; ಹಾಗೆ ಕಾಣುತ್ತಿದೆ, ಹೌದು.
January 1, 2008 1:51 AM
ಪಯಣಿಗ said...
muraliya baalya mattu hareyada mareyalaagada seLetavannu aakarshakavaagi aksharakkiLisiddira. ondaralli, ananya shaktige sharanaabhaavaviddare, mattondaralli aa shakti kaLedukondaagina hataashe, niraase mattu aashaavaada. nimma kalpaneya adbhuta drishtinotakke sharanu. aa drishti yaavudo choukattinalli bandhiyaagide anta annisitu....adu aprameyavaadaaga aa bhaavada bhaashe hegirabahudu annuva kutoohala E manasige.
Murali
January 1, 2008 4:35 AM
suptadeepti said...
ಧನ್ಯವಾದಗಳು ಮುರಳಿ. ಬಂಧ (ಚೌಕಟ್ಟು) ನಮ್ಮನ್ಯಾರನ್ನೂ ಬಿಟ್ಟಿದ್ದಲ್ಲ. ಅದನ್ನು ಮೀರುವ ಪ್ರಯತ್ನವಂತೂ ಇದ್ದೇ ಇದೆ. ಉತ್ತೇಜನಕ್ಕೆ ವಂದನೆಗಳು.
January 1, 2008 8:56 AM
Mahantesh said...
krishna maye nimmalli shuruyayitu...neevu heLodu nija..krishna artha maaDikoMdashtu eno ondu drishtikona uLide biddutte...krishna yake ista annodakke sariyada uttarane kottidira :)
January 2, 2008 1:53 AM
ನಾವಡ said...
ಸುಪ್ತದೀಪ್ತಿಯವರೇ,
ನಿಮ್ಮ ಹೊಚ್ಚ ಹೊಸದಿನ ಮುರಳೀ ಗಾನ ಓದಿದೆ. ಚೆನ್ನಾಗಿದೆ. ಅದರಲ್ಲೂ "ಸರಿಸಲು ಬಾರದು ಮೋಹವ ಚಾದರ, ಹರಿಯೇ ಹೊದೆಸಿದ ನೋಡಿ’ ಒಳ್ಳೆಯ ಸಾಲು. ಮೋಹಕತೆಯನ್ನು ತುಂಬಿ ಹೋಗಬಲ್ಲವ ಮೋಹನ ಮಾತ್ರ. ಇಂಥ ಭಾವಗೀತೆಗಳು ಮತ್ತಷ್ಟು ಬರಲಿ ಎಂಬ ನಿರೀಕ್ಷೆಯೊಂದಿಗೆ,
ನಾವಡ
January 2, 2008 3:31 AM
suptadeepti said...
ಮಹಾಂತೇಶ್ ಮತ್ತು ನಾವಡರಿಗೆ ಧನ್ಯವಾದಗಳು. ಹೀಗೇ ಬರುತ್ತಾ ಇರಿ.
January 2, 2008 9:59 AM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 22 May 2008
ಮುರಲಿಯ ಕರೆ
Thursday, December 27, 2007
(ಮುರಲಿಯ ಕರೆಯನ್ನು ಮರೆಯಲಾರದೆ, ತೊರೆಯಲಾರದೆ ಕೊರೆದದ್ದು...
ಹೊಸ ವರುಷದ ಹೊಸ್ತಿಲಲ್ಲಿ ನಿಮ್ಮೆಲ್ಲರಿಗೂ "ಮುರಳೀಧರ ಶಂಖಪಾಣಿ"ಯು ಒಳಿತನ್ನುಂಟುಮಾಡಲೆಂದು ಹಾರೈಸುತ್ತಾ....)
ಏನು ಮೋಡಿಯೋ ಎಂಥಾ ಮಾಯೆಯೊ
ಮುರಲಿಯ ಕೊಳಲಿನ ಉಲಿಗೆ
ಬೃಂದಾವನದಲಿ ಬಂಧಿಗಳೆಲ್ಲರು
ಮೋಹನ ರಾಗದ ಕರೆಗೆ
ಯಮುನೆಯ ಮಳಲಲಿ ಹುಣ್ಣಿಮೆ ನೆಳಲಲಿ
ರಂಗನ ರಂಗಿನ ಕೋಡಿ
ಸರಿಸಲು ಬಾರದು ಮೋಹದ ಚಾದರ
ಹರಿಯೇ ಹೊದೆಸಿದ ನೋಡಿ
ಅರುಣನ ಕಿರಣವ ಕೆನ್ನೆಗೆ ತಂದಿತು
ಮುದ್ದಿನ ಮಾನಿನಿ ತಂಡ
ಮರೆತರು ಮನೆಯನು ತೆರೆದರು ಮನವನು
ನಲ್ಲ ಕೃಷ್ಣ ಬಲು ಪುಂಡ
ತುಂಟನ ಕಾಟವ ಸಹಿಸೆವು ಎನ್ನುತ
ಸರಿವರು ಯಮುನಾ ತಟದಿ
ಮಾರನಯ್ಯನ ಮೋರೆಯ ನೋಡದೆ
ಇರುವುದು ಸಾಧ್ಯವೆ ಜಗದಿ?
ಮಥುರೆಗೆ ಹೊರಟಿತು ಗೋಪಿಯ ಜೀವ
ಬೃಂದಾವನ ಮರುಭೂಮಿ
ಕೊಳಲನು ತೊರೆದು ಶಂಖವನೆತ್ತಿದ
ಭುವನಾನಂದನು ಸ್ವಾಮಿ
(೧೫-ಮಾರ್ಚ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:29 PM
Labels: ರಮ್ಯಗಾನ..., ಹೊಚ್ಚಹೊಸದು
7 ಪತ್ರೋತ್ತರ:
Anonymous said...
Very nice poem Deepti!.
It as well reflects our transition from romantic, less-responsible, playful and joyful phase of life to a more tougher part of life, the so-called Maturity!
I don't think anybody has to gain maturity, if it comes fine, otherwise also fine. Maturity is a prerequisite for fulfilling our dreams/ambitions. Otherwise, maturity is a burdain!- like a crown on a sparrow's head!
In my life as well, vrindavana was always fun (though, there were not many gopikas around),now wondering why did I came to this cruel Mathura! here no social life, nobody to talk, and those gopikas here are so strange!! I don't know any of them properly.
Very nice poem, again.
regards
D.M.Sagar
December 27, 2007 7:21 PM
suptadeepti said...
ಧನ್ಯವಾದಗಳು ಸಾಗರ್. ನೀನು ಹೇಳಿದ "maturity" ಎಲ್ಲರಿಗೂ ಬರೋದಿಲ್ಲ. ತಾನಾಗೇ ಬಂದರೆ ಅದು ಗುಬ್ಬಿ ತಲೆ ಮೇಲಿನ ಕಿರೀಟವಾಗೋದಿಲ್ಲ.ಗೋಪಿಕೆಯರೆಲ್ಲ ನಮ್ಮವರಾಗಲೂ ಸಾಧ್ಯವಿಲ್ಲ, ಯಾಕೆಂದರೆ, ನಾನು/ನೀನು ಬೃಂದಾವನದವರಲ್ಲ, ಗೋಪಕುಮಾರನೂ ಅಲ್ಲ.
December 27, 2007 7:28 PM
Anonymous said...
ಜ್ಯೋತಿ,ಪದ್ಯ ತುಂಬಾ ತುಂಬಾ ಇಷ್ಟವಾಯಿತು. ಹಾಡಲೂ ಸೊಗಸಾಗಿದೆ.
-ಪೂರ್ಣಿಮ
December 28, 2007 11:02 AM
ಶಾಂತಲಾ ಭಂಡಿ said...
ಜ್ಯೋತಿ ಅಕ್ಕ...
ಹೊಸವರ್ಷಕ್ಕೆ ನೀವಿತ್ತ ಸ್ವಾಗತ್ತಕ್ಕೆ ಹಾಗೂ ಎಲ್ಲರಿಗೂ ನೀವಾಶಿಸಿದ ಶುಭಕ್ಕೆ ಧನ್ಯವಾದಗಳು. ನಿಮಗೂ ಸಹ ಹೊಸವರ್ಷದ ಶುಭಾಶಯಗಳು.
December 28, 2007 10:55 PM
suptadeepti said...
ಪೂರ್ಣಿಮಾ, ಶಾಂತಲಾ,
ಧನ್ಯವಾದಗಳು. ಮತ್ತೊಮ್ಮೆ ಶುಭ ಹಾರೈಕೆಗಳು.
December 30, 2007 12:33 AM
sritri said...
"ನೀರಿಗೆ ತಪಿಸುವ ಮೀನ್ಗಳು ನಾವು
ಕೃಷ್ಣ ವಿರಹಿಣಿ ಗೋಪಿಯರು"
ಮೋಹನ ಮುರಳಿಯ ಮಾಧುರ್ಯ ಹರಿವ ಲಹರಿಯ ತುಂಬೆಲ್ಲಾ.
ನಿನಗೆ ಬರೆದು ದಣಿವಿಲ್ಲ, ನಮಗೆ ಓದಿ...
December 31, 2007 9:00 AM
suptadeepti said...
ಧನ್ಯವಾದಗಳು ವೇಣಿ. ಓದುವವರ ದಣಿವಿನ ಬಗ್ಗೆ ಅರಿವಿಲ್ಲ. ಬರೆಯುವಾಗ ಮಾತ್ರ ದಣಿವಾಗುವುದೇ ಇಲ್ಲ.
December 31, 2007 10:13 AM
(ಮುರಲಿಯ ಕರೆಯನ್ನು ಮರೆಯಲಾರದೆ, ತೊರೆಯಲಾರದೆ ಕೊರೆದದ್ದು...
ಹೊಸ ವರುಷದ ಹೊಸ್ತಿಲಲ್ಲಿ ನಿಮ್ಮೆಲ್ಲರಿಗೂ "ಮುರಳೀಧರ ಶಂಖಪಾಣಿ"ಯು ಒಳಿತನ್ನುಂಟುಮಾಡಲೆಂದು ಹಾರೈಸುತ್ತಾ....)
ಏನು ಮೋಡಿಯೋ ಎಂಥಾ ಮಾಯೆಯೊ
ಮುರಲಿಯ ಕೊಳಲಿನ ಉಲಿಗೆ
ಬೃಂದಾವನದಲಿ ಬಂಧಿಗಳೆಲ್ಲರು
ಮೋಹನ ರಾಗದ ಕರೆಗೆ
ಯಮುನೆಯ ಮಳಲಲಿ ಹುಣ್ಣಿಮೆ ನೆಳಲಲಿ
ರಂಗನ ರಂಗಿನ ಕೋಡಿ
ಸರಿಸಲು ಬಾರದು ಮೋಹದ ಚಾದರ
ಹರಿಯೇ ಹೊದೆಸಿದ ನೋಡಿ
ಅರುಣನ ಕಿರಣವ ಕೆನ್ನೆಗೆ ತಂದಿತು
ಮುದ್ದಿನ ಮಾನಿನಿ ತಂಡ
ಮರೆತರು ಮನೆಯನು ತೆರೆದರು ಮನವನು
ನಲ್ಲ ಕೃಷ್ಣ ಬಲು ಪುಂಡ
ತುಂಟನ ಕಾಟವ ಸಹಿಸೆವು ಎನ್ನುತ
ಸರಿವರು ಯಮುನಾ ತಟದಿ
ಮಾರನಯ್ಯನ ಮೋರೆಯ ನೋಡದೆ
ಇರುವುದು ಸಾಧ್ಯವೆ ಜಗದಿ?
ಮಥುರೆಗೆ ಹೊರಟಿತು ಗೋಪಿಯ ಜೀವ
ಬೃಂದಾವನ ಮರುಭೂಮಿ
ಕೊಳಲನು ತೊರೆದು ಶಂಖವನೆತ್ತಿದ
ಭುವನಾನಂದನು ಸ್ವಾಮಿ
(೧೫-ಮಾರ್ಚ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:29 PM
Labels: ರಮ್ಯಗಾನ..., ಹೊಚ್ಚಹೊಸದು
7 ಪತ್ರೋತ್ತರ:
Anonymous said...
Very nice poem Deepti!.
It as well reflects our transition from romantic, less-responsible, playful and joyful phase of life to a more tougher part of life, the so-called Maturity!
I don't think anybody has to gain maturity, if it comes fine, otherwise also fine. Maturity is a prerequisite for fulfilling our dreams/ambitions. Otherwise, maturity is a burdain!- like a crown on a sparrow's head!
In my life as well, vrindavana was always fun (though, there were not many gopikas around),now wondering why did I came to this cruel Mathura! here no social life, nobody to talk, and those gopikas here are so strange!! I don't know any of them properly.
Very nice poem, again.
regards
D.M.Sagar
December 27, 2007 7:21 PM
suptadeepti said...
ಧನ್ಯವಾದಗಳು ಸಾಗರ್. ನೀನು ಹೇಳಿದ "maturity" ಎಲ್ಲರಿಗೂ ಬರೋದಿಲ್ಲ. ತಾನಾಗೇ ಬಂದರೆ ಅದು ಗುಬ್ಬಿ ತಲೆ ಮೇಲಿನ ಕಿರೀಟವಾಗೋದಿಲ್ಲ.ಗೋಪಿಕೆಯರೆಲ್ಲ ನಮ್ಮವರಾಗಲೂ ಸಾಧ್ಯವಿಲ್ಲ, ಯಾಕೆಂದರೆ, ನಾನು/ನೀನು ಬೃಂದಾವನದವರಲ್ಲ, ಗೋಪಕುಮಾರನೂ ಅಲ್ಲ.
December 27, 2007 7:28 PM
Anonymous said...
ಜ್ಯೋತಿ,ಪದ್ಯ ತುಂಬಾ ತುಂಬಾ ಇಷ್ಟವಾಯಿತು. ಹಾಡಲೂ ಸೊಗಸಾಗಿದೆ.
-ಪೂರ್ಣಿಮ
December 28, 2007 11:02 AM
ಶಾಂತಲಾ ಭಂಡಿ said...
ಜ್ಯೋತಿ ಅಕ್ಕ...
ಹೊಸವರ್ಷಕ್ಕೆ ನೀವಿತ್ತ ಸ್ವಾಗತ್ತಕ್ಕೆ ಹಾಗೂ ಎಲ್ಲರಿಗೂ ನೀವಾಶಿಸಿದ ಶುಭಕ್ಕೆ ಧನ್ಯವಾದಗಳು. ನಿಮಗೂ ಸಹ ಹೊಸವರ್ಷದ ಶುಭಾಶಯಗಳು.
December 28, 2007 10:55 PM
suptadeepti said...
ಪೂರ್ಣಿಮಾ, ಶಾಂತಲಾ,
ಧನ್ಯವಾದಗಳು. ಮತ್ತೊಮ್ಮೆ ಶುಭ ಹಾರೈಕೆಗಳು.
December 30, 2007 12:33 AM
sritri said...
"ನೀರಿಗೆ ತಪಿಸುವ ಮೀನ್ಗಳು ನಾವು
ಕೃಷ್ಣ ವಿರಹಿಣಿ ಗೋಪಿಯರು"
ಮೋಹನ ಮುರಳಿಯ ಮಾಧುರ್ಯ ಹರಿವ ಲಹರಿಯ ತುಂಬೆಲ್ಲಾ.
ನಿನಗೆ ಬರೆದು ದಣಿವಿಲ್ಲ, ನಮಗೆ ಓದಿ...
December 31, 2007 9:00 AM
suptadeepti said...
ಧನ್ಯವಾದಗಳು ವೇಣಿ. ಓದುವವರ ದಣಿವಿನ ಬಗ್ಗೆ ಅರಿವಿಲ್ಲ. ಬರೆಯುವಾಗ ಮಾತ್ರ ದಣಿವಾಗುವುದೇ ಇಲ್ಲ.
December 31, 2007 10:13 AM
Subscribe to:
Posts (Atom)